Sunday 30 October 2011

ಮಂಜೇಶ್ವರ ಮಂಡಲ ಕಾಂಗ್ರೆಸ್ ಪದಾಧಿಕಾರಿಗಳ ಸಭೆ

ಮಂಜೇಶ್ವರ : ಮಂಜೇಶ್ವರ ಮಂಡಲ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಯು ಮಂಡಲಾಧ್ಯಕ್ಷ ಹಮೀದ್ ಹೊಸಂಗಡಿ ಅಧ್ಯಕ್ಷತೆಯಲ್ಲಿ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಿತಿ ಅಧ್ಯಕ್ಷ ಡಿ.ಎಂ.ಕೆ ಮೊಹಮ್ಮದ್ ಉದ್ಗಾಟಿಸಿದರು. ಬಳಿಕ ಮಾತನಾಡಿದ ರಾಜ್ಯದ ಐಕ್ಯರಂಗ ಸರಕಾರ ಹಾಗೂ ಕೇಂದ್ರದ ಯು.ಪಿ.ಎ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜ್ಯಾರಿಗೆ ತಂದಿದೆ. ಈ ಯೋಜನೆಗಳ ಫಲಾನುಭವವನ್ನು ಸಾಮಾನ್ಯ ಜನರು ಪಡೆಯುವಂತೆ ಜನತೆಗೆ ಕಾಂಗ್ರೆಸ್ ಕಾರ್ಯಕರ್ತರು ಮಾಹಿತಿ ನೀಡಬೇಕು ಎಂದರು. ಮಂಡಲ ಪದಾಧಿಕಾರಿಗಳಾದ ಕಾಯಿಂಜಿ ಅರಿಮಲೆ , ಪುತ್ತುಬಾವು , ಇಬ್ರಾಹಿಂ ಐ.ಆರ್.ಡಿ.ಪಿ , ಮೂಸಾ , ಮಾಲಿಂಗ , ಯೋಗೀಶ್ ಮಂಜೇಶ್ವರ , ಹಂದುಲ್ಲಾ ತಂಘಳ್ , ಯೂತ್ ಕಾಂಗ್ರೆಸ್ ಮಂಜೇಶ್ವರ ಮಂಡಲಾಧ್ಯಕ್ಷ ಇರ್ಶಾದ್ ಮಂಜೇಶ್ವರ ಮೊದಲಾದವರು ಪಾಳ್ಗೊಂಡಿದ್ದರು. ಯೂತ್ ಕಾಂಗ್ರೆಸ್  ಜಿಲ್ಲಾ ಸಮಿತಿ ಸದಸ್ಯ ಆರಿಫ್ ಮಚ್ಚಂಪಾಡಿ ಸ್ವಾಗತಿಸಿ ನಾಗೇಶ್ ಮಂಜೇಶ್ವರ ವಂದಿಸಿದರು.

No comments:

Post a Comment